ಯಾರ ಹಂಗೂ ಇಲ್ಲದೇ

ನೀನು ಬರಿ ನೋವ ಕೊಟ್ಟೆ,
ಚಿಂತಿಸುವ ಭಾರ ಎನ್ನದೆ.
ಈಗ ನಂಬಿಕೂಡುವ ಕಾಲ ಇಲ್ಲ,
ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ.
ಗೊತ್ತು ನನ್ನ ಹಾಗೆ ವಿಚಾರಿಸುವರು
ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ನೆನಪು ಬಟ್ಟೆ
ಅದರಪಟ್ಟಿಗೆ ಗುದ್ದಾಡುತ್ತ ನಾನು
ಬದುಕಲೆತ್ನಿಸಿದೆ, ನೂರು ಮಾತುಗಳು
ಕುಹಕಗಳು, ಮನಸ್ಸನ್ನು ಕೆಡಿಸಲಿಲ್ಲ,
ನನ್ನ ಓಟದ ಬದುಕು ನನ್ನದಾಗಿತ್ತು,
ಅವರಿವರು ಹೀಗೆ ಯೋಚಿಸುತ್ತಿದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ಕನಸುಗಳ ಕೊಟ್ಟೆ
ಎಲ್ಲವನು ಉಡಿಯಲಿರಿಸಿ ಬಣ್ಣದ
ಕಾಮನ ಬಿಲ್ಲನ್ನೇರಿ ಪಯಣಿಸಿದೆ,
ಸಾವಿರ ಕಣ್ಣುಗಳ ಚುಚ್ಚು ನೋಟ
ವಿಶಾಲ ಪ್ರೀತಿಗೆ ಎಲ್ಲಿಲ್ಲ ಹೇಳು ನೋವು?
ಕೆಲವರು ನಡೆಯುತ್ತಿದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ಸುಳ್ಳುಗಳ ಹೇಳಿದೆ
ಸತ್ಯವೆಂದು ನಂಬಿ ಎಳೆ ರಂಗೋಲಿ
ಎಳೆ ಬದುಕು ಚಿತ್ರ ವಿಚಿತ್ರವೆಂದು
ಮಾತಿನ ಮಂಟಪವ ಕಟ್ಟಿದೆ,
ನೋಯಿಸುವ ನುಡಿ ನೊಂದ ತಪ್ತ ಹೃದಯ,
ಆದರೂ ಎಲ್ಲರೂ ಓಡುತ್ತಿದ್ದಾರೆ ಯಾರ ಹಂಗೂ ಇಲ್ಲದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮರ್ಥನೆ : ಗಂಡ
Next post ಅಲೆಮಾರಿ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys